No Ads

ಮುಂಬೈನಲ್ಲಿ ಮಾರಣಹೋಮ ನಡೆಸಿದ್ದ ಪಾಪಿ ಭಾರತಕ್ಕೆ; ರಾಣಾ ಮಾಡಿದ ರಕ್ಕಸ ಕೃತ್ಯ..!

India 2025-04-10 14:48:25 51
post

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವವ್ವೂರ್ ರಾಣಾ ಕೊನೆಗೂ ಭಾರತಕ್ಕೆ ಕರೆತರಲಾಗಿದೆ. 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯ ರೂವಾರಿಯೇ ಈ ತಹವ್ವೂರ್​ ರಾಣಾ. ಭಾರತದ ಮೋಸ್ಟ್ ವಾಂಟೆಡ್​ ಈ ಉಗ್ರ, ಪಾಕಿಸ್ತಾನದಿಂದ ಕೆನಡಾಗೆ ಹೋಗಲಿ ನೆಲೆಸಿದ್ದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮೆರಿಕಾ ಆತನನ್ನು ಬಂಧಿಸಿತ್ತು. ಸದ್ಯ ಭಾರತ ಸರ್ಕಾರದ ಮನವಿ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಫಲವಾಗಿ ಅಮೆರಿಕಾ ರಾಣಾನನ್ನು ಗಡಿಪಾರು ಮಾಡಿದೆ. ಈ ಹಿನ್ನೆಲೆ ಈತನನ್ನು ಭಾರತಕ್ಕೆ ಶಿಫ್ಟ್ ಮಾಡಲಾಗಿದೆ. ಅಮೆರಿಕಾದ ಸುಪ್ರೀಂಕೋರ್ಟ್​ ಅನುಮತಿ ಪಡೆದುಕೊಂಡು ಈ ನೀಚನನ್ನು ಭಾರತಕ್ಕೆ ಎಳೆದುಕೊಂಡು ಬರಲಾಗಿದೆ.

ಹಫೀಸ್ ಸಯೀದ್​ನ ಲಷ್ಕರ್ ಏ ತೊಯ್ಬಾದ ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ಭಾರತದತ್ತ ದಾರಿ ತೋರಿದ್ದೇ ಈ ರಾಣಾ. ಈತನು ಕೂಡ ಲಷ್ಕರ್ ಏ ತೊಯ್ಬಾದ ಸಕ್ರಿಯ ಸದಸ್ಯ. ಐಎಸ್​ಐ ಅಧಿಕಾರಿ ಮೇಜರ್ ಇಕ್ಬಾಲ್​ನ ಅತ್ಯಾಪ್ತ ಈ ತಹಾವ್ವುರ್​ ರಾಣಾ. ಕೆನಡಾ ನಾಗರಿಕನಾಗಿರುವ ಈತ ಪಾಕಿಸ್ತಾನದಲ್ಲಿ ತನ್ನ ಭಯೋತ್ಪಾದನಾ ಕಾರ್ಯಗಳನ್ನು ನಡೆಸುತ್ತಿದ್ದ.

2008 ನವೆಂಬರ್ 26 ರಂದು ಈತ ಟಾರ್ಗೆಟ್​ ಮಾಡಿದ್ದ ಸ್ಥಳಗಳಲ್ಲಿಯೇ 10 ಜನ ಉಗ್ರರು ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಫೋಲ್ಡ್​ ಕೆಫೆ. ನಾರಿಮನ್ ಹೌಸ್​, ಹೋಟೆಲ್ ತಾಜ್​ ಸೇರಿ ಹಲವು ಕಡೆ ಉಗ್ರರು ದಾಳಿ ನಡೆಸಿದ್ದರು. ಈ ಎಲ್ಲಾ ಟಾರ್ಗೆಟ್​​ಗಳನ್ನು ಫಿಕ್ಸ್ ಮಾಡಿದ್ದೇ ರಾಣ.

ಇದು ಮಾತ್ರವಲ್ಲ ಈ ದಾಳಿಯನ್ನು ತಹಾವ್ವೂರ್​ ರಾಣ ಸಮರ್ಥಿಸಿಕೊಂಡಿದ್ದ. ಇದಕ್ಕೆ ಕಾರಣರಾದವರಿಗೆ ಪಾಕ್ ಸೇನೆ ಗೌರವ ಕೊಡಬೇಕು ಎಂದಿದ್ದ. ಇಂತಹ ನರರಾಕ್ಷಸ ಈಗ ಭಾರತದ ಎನ್​ಐಎ ಹಾಗೂ ಇಂಟಲಿಜೆನ್ಸ್ ಬ್ಯುರೊದ ಅಧಿಕಾರಿಗಳೊಂದಿಗೆ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದಾನೆ. ಈತನ ವಿಚಾರಣೆ ದೆಹಲಿಯ ಕೋರ್ಟ್​ನಲ್ಲಿಯೇ ನಡೆಯಲಿದ್ದು. ತಿಹಾರ್ ಜೈಲಿನಲ್ಲಿ ಈತನನ್ನು ಸೆರೆಯಲ್ಲಿಡಲು ನಿರ್ಧಾರ ಮಾಡಲಾಗಿದೆ

No Ads
No Reviews
No Ads

Popular News

No Post Categories
Sidebar Banner
Sidebar Banner