No Ads

ಆತನಿಂದ ಹಾಡು ಹಾಡಿಸಿದ್ರೆ ನೇರ ಹೊಣೆ ನೀವು ಆಗ್ತೀರಾ..! ರೂಪೇಶ್ ರಾಜಣ್ಣ ವಾರ್ನಿಂಗ್

ಕರ್ನಾಟಕ 2025-05-03 13:36:11 817
post

ಸೋನು ನಿಗಮ್ ಅವಿವೇಕಿ, ದುರಹಂಕಾರಿ ಎಂದು ಬಿಗ್​ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೆಂಡಮಂಡಲ. ಸ್ಟಾರ್​ ಗಾಯಕ ಕನ್ನಡ ಹಾಡುಗಳ ಬಗ್ಗೆ, ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತಲೇ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಅಲ್ಲದೇ ಸೋನು ವಿರುದ್ಧ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಬಹಿಷ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತಾಡಿದ ಅವರು, ಆತನ್ನನ ಮೂಸಿ ಕೂಡಾ ನೋಡ್ತಾ ಇಲ್ಲ. ನಮ್ಮ ಕನ್ನಡಿಗರು ಭಯೋತ್ಪಾದಕರು ಅಂತ ಹೇಳಿಕೆ ಕೊಟ್ಟಿದ್ದಾನೆ. ಈ ಮೂರ್ಖನನ್ನ ಕನ್ನಡ ಚಲನಚಿತ್ರ ರಂಗದಿಂದ ಬ್ಯಾನ್ ಮಾಡಬೇಕು. ಯಾವುದೇ ಚಲನಚಿತ್ರ ಅವ್ರು ಈತನ ಕರೆಸಿ ಹಾಡು ಹೇಳಿದ್ರೆ ಆ ಸಿನಿಮಾ ರಿಲೀಸ್ ಆಗೋಕೆ ಬಿಡಲ್ಲ. ಕನ್ನಡ ಚಲನಚಿತ್ರ ರಂಗದ ಯಾವುದೇ ಸಿನಿಮಾದಲ್ಲಿ ಹಾಡಬಾರದು. ಸೋನು ನಿಗಮ್ ಕನ್ನಡ ಚಲನಚಿತ್ರ ಹಾಡು ಹೇಳಿದ್ರೆ ವಾಣಿಜ್ಯ ಮಂಡಳಿ ನೇರ ಹೊಣೆ ಆಗುತ್ತೆ. ಯಾವುದೇ ಕಾರಣಕ್ಕೂ ಇಂತಹ ಅವಿವೇಕಿ ಅವಕಾಶ ಕೊಡಬಾರದು. ನೇಮ್ ಫೆಮ್ ಬಂದಿರುವುದು ಕರ್ನಾಟಕದಲ್ಲಿ. ಆತನನ್ನ ಕರೆಸಿ ಕಾರ್ಯಕ್ರಮ ಮಾಡುವ ಖಾಸಗಿ ಅವರಿಗೆ ನಾಚಿಕೆ ಆಗಬೇಕು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕನ್ನಡಿಗರ ಟಾರ್ಗೆಟ್ ಮಾಡ್ತಾ ಇದ್ದಾರಾ, ನಮ್ಮ ವಿರುದ್ಧ ನಮ್ಮನ್ನ ಬೈಲಿಕ್ಕೆ ಕರೆಸ್ತಾ ಇದ್ದೀರಾ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಅರ್ಜುನ್ ಜನ್ಯ ಹರಿಕೃಷ್ಣ, ಅಜನೀಶ್ ಲೋಕನಾಥ್​ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಆತನಿಂದ ಹಾಡು ಹಾಡಿಸಿದ್ರೆ ನೇರ ಹೊಣೆ ನೀವು ಆಗ್ತೀರಾ. ಕನ್ನಡಿಗರ ವಿರುದ್ಧ ಇದ್ದೀರಾ ಅಂತ ಆಗುತ್ತೆ ಎಚ್ಚರಿಕೆ ನೀಡಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner