ಉತ್ತರ ಪ್ರದೇಶ; ಉತ್ತರ ಪ್ರದೇಶ (uttara pradesh)ದ ಕೌಶಾಂಬಿ ಜಿಲ್ಲೆ (kaushambi district) ಯ ಯುವಕ ಮಂಗಳ್ ಸರೋಜ್ (mangal saroj) ಡ್ರೀಮ್ 11 ನಲ್ಲಿ 39 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 4 ಕೋಟಿ ಈತನ ಕೈ ಸೇರಿದೆ.
ಮಂಗಳ್ ಸರೋಜ್ ಕಳೆದ ಮಾರ್ಚ್ ತಿಂಗಳಿನಿಂದ ಡ್ರೀಮ್ 11 ನಲ್ಲಿ ಆಟ ಆಡಲು ಪ್ರಾರಂಭಿಸಿದ್ದು, ಇದುವೇ ತನ್ನ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ತಿಳಿದಿರಲಿಲ್ಲ. 77 ಬಾರಿ ತಂಡ ರಚಿಸಿದ್ದರೂ ಪ್ರತಿ ಬಾರಿಯೂ ಸೋಲನ್ನು ಅನುಭವಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮರಳಿ ಯತ್ನ ಮಾಡು ಎನ್ನುವಂತೆ ತಂಡ ರಚಿಸುತ್ತಲೆ ಇದ್ದು, 78 ನೇ ಬಾರಿ ಈ ಯುವಕನಿಗೆ ಅದೃಷ್ಟ ಒಲಿದಿದೆ. ಅಂದಹಾಗೆ, ಕಳೆದ ಏಪ್ರಿಲ್ 29 ರಂದು ಚೆನ್ನೈ ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ಸರಿಸುಮಾರು 39 ಖರ್ಚು ಮಾಡಿ ತಂಡ ರಚಿಸಿದ್ದು, ಇವರ ಬದುಕಿನ ದಿಕ್ಕೇ ಬದಲಾಗಲು ಇದುವೇ ಕಾರಣವಾಗಿದೆ. ಬೆಳ್ಳಂಬೆಳಗ್ಗೆ ಫಲಿತಾಂಶ ನೋಡಿದಾಗ ಡ್ರೀಮ್ 11 ನ 4 ಕೋಟಿ ಗೆದ್ದುಕೊಂಡು ಕೋಟಿ ಒಡೆಯನಾಗಿರುವುದು ತಿಳಿದಿದೆ. ರಾತ್ರಿ ಬೆಳಗಾಗುವುದರೊಳಗಾಗಿ ಇಡೀ ಗ್ರಾಮವೇ ಈ ಯುವಕನ ಸಾಧನೆಗೆ ಮೆಚ್ಚಿಕೊಳ್ಳವಂತಾಗಿದೆ.
ತಾವು ಡ್ರೀಮ್ 11 ನಲ್ಲಿ ಹೂಡಿಕೆ ಮಾಡಿರುವುದರ ಬಗ್ಗೆ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಐಪಿಎಲ್ ಆರಂಭದಿಂದಲೂ ಡ್ರೀಮ್ 11 ನಲ್ಲಿ ಹಣಹಾಕಿದ್ದೆ. ಪ್ರಾರಂಭದಲ್ಲಿ ಒಂದೇ ಒಂದು ರೂಪಾಯಿ ಬಂದಿರಲಿಲ್ಲ. ಆದರೆ, ಪಂಜಾಬ್ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಹಣ ಹೂಡಿಕೆ ಮಾಡಿದ್ದು ನಾಲ್ಕು ಕೋಟಿ ರೂಪಾಯಿ ಬಂದಿದೆ. ಈ ಹಣದಲ್ಲಿ ಉತ್ತಮ ವ್ಯಾಪಾರ ಮಾಡ್ತೀನಿ ಎಂದು ಹೇಳಿರುವುದನ್ನು ನೋಡಬಹುದು.
ಈ ವಿಡಿಯೋವೊಂದು ಏಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೂ ರೈತ ಕುಟುಂಬದ ಯುವಕನಿಗೆ ಒಲಿದ ಅದೃಷ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು , ‘ಬದುಕು ಎಂದರೇನೇ ಹೀಗೆ, ಸಣ್ಣ ಆಟವು ಬದುಕಿನ ದಿಕ್ಕನ್ನು ದೊಡ್ಡ ರೀತಿಯಲ್ಲಿಯೇ ಬದಲಾಯಿಸುತ್ತದೆ’ ಎಂದಿದ್ದಾರೆ. ಇನ್ನೊಬ್ಬರು, ‘ನನಗೆ ಕ್ರಿಕೆಟ್ ಗೆ ಸಂಬಂಧ ಪಟ್ಟ ಆಪ್ ಗಳ ಬಳಕೆಯ ಬಗ್ಗೆ ಗೊತ್ತಿಲ್ಲ, ಆದರೆ ಈ ಆಪ್ ಗಳು ಅನೇಕರ ಬದುಕನ್ನೇ ಬದಲಾಯಿಸಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಇವನು ನಿಜಕ್ಕೂ ಅದೃಷ್ಟವಂತ ವ್ಯಕ್ತಿ’ ಎಂದಿದ್ದಾರೆ. ಕೆಲವರು ಈ ಯುವಕನ ಸಾಧನೆಸಾಧನೆ ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Log in to write reviews