ರಾಯಚೂರು: ಫೆಬ್ರವರಿ 12 ರಂದು ರಾಯಚೂರಿನಲ್ಲಿ ಭಿಕ್ಷುಕಿಯೊಬ್ಬರ ಕೊಲೆ ನಡೆದಿತ್ತು. ಸದ್ಯ ಆಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು, 30 ಸಾವಿರ ಬೆಲೆ ಬಾಳುವ ಬೆಳ್ಳಿ ಒಡವೆಗಾಗಿ ಬಿಕ್ಷುಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ನೆರೆಯ ಆಂದ್ರ ಪ್ರದೇಶದ ಐಜ ಗ್ರಾಮದ ಬುಡ್ಗ ಸಮುದಾಯದ ಭಿಕ್ಷಿಕಿ ರೋಗೆಮ್ಮ ಎಂಬ ಮಹಿಳೆಯನ್ನು, ರಾಮಚಂದ್ರ (19) ಮತ್ತು ಆತನ ಸ್ನೇಹಿತ ಸ್ನೇಹಿತ ತಿಮ್ಮಪ್ಪ(30) ಕೊಲೆ ಮಾಡಿದ್ದರು. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ರೋಗೆಮ್ಮನ ಮೃತದೇಹ ಚಂದ್ರಬಂಡಾ ನಿರ್ಜನ ಪ್ರದೇಶದಲ್ಲಿ ರಕ್ತಸಿಕ್ತವಾಗಿ ಸಿಕ್ಕಿತ್ತು. ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಪೊಲೀಸರು ಮೃತಳ ಚಲನವಲನಗಳ ಪರಿಶೀಲನೆ ಮಾಡಿದಾಗ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡ ಕಾರು ಮೂಲಕ ಸುಳಿವು ಸಿಕ್ಕಿತು. ಟೋಲ್ ಗೇಟ್ ಪಾಸ್ ಸಹ ಸಹಾಯಮಾಡಿತು. ಆ ಕಾರು ಬೋಯಾ ರಾಮಚಂದ್ರನದ್ದು ಎಂದು ಪೊಲೀಸರು ಪತ್ತೆ ಹಚ್ಚಿದರು. ತನಿಖೆಯಲ್ಲಿ ರಾಮಚಂದ್ರ ಮತ್ತು ಆತನ ಸ್ನೇಹಿತ ತಿಮ್ಮಪ್ಪ (30) ಒಂಟಿ ಪ್ರಯಾಣಿಕರನ್ನೇ ಗುರಿಯಾಗಿಸಿ ದರೋಡೆ ಮಾಡುತ್ತಿದ್ದವರಾಗಿರುವುದು ಗೊತ್ತಾಯಿತು. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
"ಇಲ್ಲಿ ಚಂದ್ರಬಂಡಾ ನಿರ್ಜನ ಪ್ರದೇಶದಲ್ಲಿ ಸುಮಾರು ಐವತ್ತು ವರ್ಷದ ಮಹಿಳೆಯ ಮೃತದೇಹ ಸಿಕ್ಕಿತ್ತು. ಸ್ಥಳೀಯರು ನಮಗೆ ಮಾಹಿತಿ ನೀಡಿದ್ದರು. ಆಕೆ ಯಾರು ಎಲ್ಲಿನವರು ಎಂದು ನಮಗೆ ಗೊತ್ತಾಗಲಿಲ್ಲ. ಪ್ರಕರಣ ಬೇಧಿಸಲು ತಂಡ ರಚಿಸಿದೆವು. ಆನಂತರ ಆಳವಾದ ತನಿಖೆಗೆ ಇಳಿದೆವು. ಯಾವ ಸಿಸಿಕ್ಯಾಮೆರಾಗಳಲ್ಲೂ ಆರೋಪಿ ಪತ್ತೆ ಮಾಡಲಾಗಿರಲಿಲ್ಲ . ಇನ್ನಷ್ಟು ತನಿಖೆ ಹೆಚ್ಚಿಸಿದಾಗ ಸತ್ಯ ಹೊಬಿದ್ದಿದೆ. ರೋಗೆಮ್ಮ ಭಿಕ್ಷುಕಿ ಅಲ್ಲ. ಹಬ್ಬ ಹರಿದಿನದಂದು ಭಿಕ್ಷೆ ಬೇಡುವುದು ಸಂಪ್ರದಾಯ. ಹೀಗಾಗಿ ಭಿಕ್ಷೆ ಬೇಡುತ್ತ ಲಿಫ್ಟ್ ಕೇಳಿದ್ದಾಳೆ. ಆಕೆಯನ್ನು ಒಂದೆಡೆ ಕರೆದೊಯ್ದು ಕಂಠ ಪೂರ್ತಿ ಕುಡಿಸಿ, ಆಕೆಯ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಒಂದು ಕಡೆ ಮೃತ ಮಹಿಳೆ ಕುಟುಂಬಸ್ಥರಿಗೆ ತಾಯಿಯ ಸಾವಿನ ರಹಸ್ಯ ತಿಳಿದಂತಾಗಿದೆ. ಒಡವೆಯಾಸೆಗೆ ಅಮಾಯಕಿ ಕೊಂದ ಪಾಪಿಗಳು ಕಂಬಿ ಹಿಂದೆ ಸೇರಿದ್ದಾರೆ. ಆರೋಪಿ ಬೋಯಾ ರಾಮಚಂದ್ರನದ್ದು ನಿಶ್ಚಿತಾರ್ಥವಿತ್ತು. ಒಂದು ದಿನದ ಮುಂಚೆಯೇ ಹಂತಕನನ್ನ ಬಂಧಿಸಲಾಗಿದೆ. ಕೊಲೆಗಾರನ ಹೆಂಡತಿಯಾಗಬೇಕಿದ್ದ ಯುವತಿಗೂ ಬಿಗ್ ರಿಲೀಫ್ ಸಿಕ್ಕಿದೆ ಎಂದು ಪೊಲೀಸರು ಹೇಳಿದರು.
Log in to write reviews